Thursday, July 15, 2010

ಸತ್ಯ,ಅಸತ್ಯ,ಸುಳ್ಳು

:


ಸತ್ಯವೆನ್ನುವುದು ಅತಿ ಕ್ಷಣಿಕ ಜೀವಿ. ಮೋಂಬತ್ತಿಯ ಉರಿಯಂತೆ ಬಹಳ ಜಾಗೃತಿಯಾಗಿ ಅದನ್ನು ಉಳಿಸಿಕೊಳ್ಳಬೇಕು.

ಇಲ್ಲದ್ದಿದ್ದಲ್ಲಿ ಕ್ಷಣಾರ್ಧದಲ್ಲಿ ನಂದಿ ಹೊಗುತ್ತದೆ. ಜನಗಳ ಜ್ಞಾಪಕ ಶಕ್ತಿಯಂತೆ ಅದರ ಇರುವಿಕೆಯೂ ಅಳಿಸಿ ಮರೆತು ಹೋಗುತ್ತದೆ.

ಅಸತ್ಯ ಸತ್ಯ ಎನ್ನುವ ನಾಣ್ಯದ ಇನ್ನೊಂದು ಮುಖ. ತದ್ವಿರುದ್ಧ. ಚಿರಸ್ಥಾಯಿ. ಗಟ್ಟಿ ಜೀವ.

ಅದನ್ನು ಎಷ್ಟು ಪ್ರಯತ್ನಿಸಿದರೂ ನಾಶ ಮಾಡಲು ಸಾಧ್ಯವಿಲ್ಲ. ವರ್ಷಾನು ಗಟ್ಟಲೆಯಾದರು ಅಸತ್ಯ ಸಾಯದು. ಮುಚ್ಚಿಡಲೂ ಆಗದು.

ಸುಳ್ಳು ಸತ್ಯವನ್ನು ಮುಚ್ಚಿಡಲು ಮಾನವನು ತನ್ನ ಅನುಕೂಲಕ್ಕೆ ಅಳವಡಿಸಿಕೊಂಡ ಉಡುಪು. ಹಾಗು, ಸತ್ಯ ಅಸತ್ಯಗಳನ್ನು ಬೆತ್ತಲೆ ನೋಡಲು ಧೈರ್ಯವಿರದ ಮಾನವನ ಸಂಕೋಚ, ಪುಕ್ಕಲು ಪ್ರವೃತ್ತಿಯ ಸಂಕೇತ. ಇದನ್ನು ಭಗವಂತ ಅಡಂ ಮತ್ತು ಈವ್ ಅವರೊಡನೆಯೇ ಸೃಷ್ಟಿಸಿದನೇನೋ?

ಸತ್ಯ ಅಸತ್ಯ ಎಂದು ಬರಿ ಕಪ್ಪು ಬಿಳುಪೆಂದು ನಿರ್ಧರಿಸುವುದು ಅತಿ ಧೀರತ್ವ. ಈ ಚೈತನ್ಯ ಎಲ್ಲರಲ್ಲೂ ಇರುವುದಿಲ್ಲ. ಅದಕ್ಕೇ ಏನೋ ಮಾನವ ಸಮಾಜ ಕಪ್ಪು ಬಿಳುಪಿನ ಮಧ್ಯೆ ೨೫೫ ದರ್ಜೆಗಳನ್ನು ಕಲ್ಪಿಸಿರುವುದು.

ಇದನ್ನು ಉದಾಹರಣೆ ಎನ್ನುವ ಕಿಡಕಿಯ ಮೂಲಕ ನೋಡಿದಾಗ ಸುಲಭವಾಗಿ ಅರ್ಥವಾಗುತ್ತದೆ.

ಮುನಿರತ್ನ ಕೊಲೆ ಗೋಡೆ ಕಂಟ್ರಾಕ್ಟರ್, ಕಾರ್ಪೊರೇಟರ್, ಇತ್ತೀಚಿನ ಸುದ್ದಿಯಲ್ಲಿರುವವ.

ಸಂಜನಾ ಸಿಂಗ್ ಅವನು ಕಟ್ಟಿದ ಗೋಡೆ ಕೆಳಗೆ ಸಿಕ್ಕಿ ಸತ್ತ ಮರುದಿನ, ಮರುಗಿ

೧ ಕೋಟಿ ರೂಪಾಯಿ ಪರಿಹಾರ ಕೊಡಲು ಸಿದ್ಧವಿದ್ದವ.

ಆಗ ಸತ್ಯ ಅವನಿಗೂ ಅರಿವಿತ್ತು. ತಾನು ಕಟ್ಟಿದ ಕೀಳು ಮಟ್ಟದ ಗೋಡೆಯೇ ಅವಳ ಸಾವಿಗೆ ಕಾರಣ ಎಂದು ಚೆನ್ನಾಗಿ ಅರಿತಿದ್ದ. ಆ ಅಪರಾಧ ಪ್ರಜ್ಞೆಯೇ ಅವನನ್ನು ಹಾಗೆ ಮಾತಾಡಲು ಪ್ರೇರೆಪಿಸಿದ್ದು.

ಮಾನವ ಸಹಜ ಪುಕ್ಕಲು, ಲೋಭಕ್ಕೆ ಆ ಸಮಯದಲ್ಲಿ ತಾಣವಿರಲ್ಲಿಲ್ಲ.

ಸಮಯ ಸರಿದಂತೆ ಆ ಭಾವನೆಗಳು ಮತ್ತೆ ತುಂಬಿಕೊಂಡವು. ತಾನೊಬ್ಬನೇ ಆ ಅನ್ಯಾಯದಲ್ಲಿ ಲಾಭ ಪಡೆದವನಲ್ಲ? ಏನೂ ಮಾಡದೆಯೇ ಆ ೮೦೦ ಅಡಿ ಗೋಡೆಯಿಂದ ಲಕ್ಷಾಂತರ ಗಳಿಸಿ ಕೊಂಡಿರುವ ಇತರರೂ ಆ ಕೊಲೆಗೆ ಹೊಣೆ ಅಲ್ಲವೇ? ತಾನೊಬ್ಬನೇ ಯಾಕೆ ಪರಿಹಾರ ಕೊಡಬೇಕು? ಹಾಗು ಜೈಲೂ ಸೇರ ಬೇಕು? ಯೋಚನೆಗಳು ಬಂದಕೂಡಲೇ ಈ ಉಡುಪುಗಳನ್ನು ಹೇಗಾದರೂ ಮಾಡಿ ಆ ಸತ್ಯಕ್ಕೆ ಉಡಿಸಿ ಅಸತ್ಯವನ್ನಾಗಿಸಲು ಪ್ರಾರಂಭಿಸಿದ. ಉಡುಪು ಒಂದು ರೀತಿಯಲ್ಲಿ

ಸುಳ್ಳೇ ಸೈ! ಅದು ನಿಜವನ್ನು ಮುಚ್ಚಿಡುತ್ತದೆ ಅಲ್ಲವೇ? ಅಲ್ಲ ಅದರ ಕರ್ತವ್ಯವೇ ಅದಲ್ಲವೇ?

ಈಗ ಅದು ತಾನು ಬರೇ ಸಪ್ಪ್ಲೇಯರ್ ತನ್ನ ಹೊಣೆ ಏನೂ ಇಲ್ಲ ಎಂದು ನಾಟಕ ಶುರು ಮಾಡಿದ್ದಾನೆ. ಇದು ಎಲ್ಲಾ ಅಪರಾಧಿಗಳ ಧಾಟಿಯೇ. ಕುಡಿದು ಪ್ರಾಣ ಹಾನಿ ಮಾಡಿದ ನಂದಾ, ಸಾಲ್ಮಾನ್ ಖಾನ್ ಅವರ ಗಾಡಿ ಮಾಲೀಕ ನಾನಲ್ಲ ಬರೇ ಚಾಲಕ ಎನ್ನುವ ಸಬೂಬಿನಂತೆ.

ಮುಂದೆ ಮುನಿರತ್ನಂ ಎಲ್ಲಾ ತಪ್ಪಿತಸ್ಥರಂತೆ ತನಗೆ ಅನ್ಯಾಯವಾಗಿದೆ ಎಂದು ಸರ್ಕಾರದಿಂದ ಏಕೆ ಸಿಂಗ್ ರವರ ಪರಿವಾರದಿಂದಲೇ ಪರಿಹಾರ ಕೇಳಲು ಶುರು ಮಾಡಿದರೂ ಆಶ್ಚರ್ಯವೇನಿಲ್ಲ. ಅದಕ್ಕೆ ಅವನನ್ನು ಪ್ರತಿನಿಧಿಸಲು ಈ ನಡುವೆ ಅನೇಕ ವಕೀಲರೂ ಸಿದ್ಧವಿರುತ್ತಾರೆ!

ಹಾಗಿರುವಾಗ ಸುಳ್ಳು , ಸತ್ಯ ಅಸತ್ಯಗಳನ್ನು ಮುಚ್ಚಿಡಲು ಮಾಡಿರುವ ಮಾನವ ನಿರ್ಮಿತ ಉಡುಪು ಅನ್ನಿಸುವುದಿಲ್ಲವೇ?







--

M.B.Nataraj

MS(Georgetown Univ, Wash DC)

Registered Medical Technologist

American Medical Technologists-USA

Microbiologist/Medical Technologist

Bangalore-560086

Friday, July 2, 2010

ಮಹಾತ್ಮಾ ಗಾಂಧಿಯವರ ಜನ್ಮ ಸ್ಥಳದಲ್ಲಿ ಸತ್ಯದ ಕೊಲೆ?

ಇತ್ತೀಚಿನ ಒಂದು ಘಟನೆಯೇ ಈ ಆಲೋಚನೆಗೆ ಮೂಲ ಕಾರಣ.

ಮೊದಲನೆಯ ನೋಟಕ್ಕೆ ಇದು ಅಷ್ಟು ದೊಡ್ಡ ಅಪರಾಧವೆಂದು ಅನ್ನಿಸದು.

ಆದರೆ ಸ್ವಲ್ಪ ಆಲೋಚನೆ ಮಾಡಿ ನೋಡಿದರೆ ಈ ಬಗೆಯ ಸಣ್ಣ ಸಣ್ಣ ದಿನಂಪ್ರತಿ ಆಗುವ ಮತ್ತು ನಾವು

ತಡೆದು ಕೊಳ್ಳುತ್ತಿರುವ ಪ್ರಸಂಗಗಳಿಂದಲೇ ನಮ್ಮ ದೇಶ ಹಾಳಾಗುತ್ತಿರುವ ಮುಖ್ಯ ಕಾರಣವನ್ನು ಕಾಣ ಬಹುದು.

ಎರಡು ವರ್ಷಗಳ ಕೆಳಗೆ ನನ್ನ ಮಗನ ದ್ವಿಚಕ್ರ ವಾಹನ ಶಿರಸ್ತ್ರಾಣ ಧರಿಸದೆ ನಡಿಸುತ್ತಿದ ಉಲ್ಲಂಘನೆಯ ಸೂಚನೆ ಬಂತು.

ಕಾನೂನು ಪರಿಪಾಲನೆಯ ಕರ್ತವ್ಯದ ಸಂಪೂರ್ಣ ಅರಿವಿದ್ದ ಅವನನ್ನು ಕೇಳಿದಾಗ ಸಾಧ್ಯವೇ ಇಲ್ಲವೆಂದು ಹೇಳಿದ.

ಆದರೂ ಅಕಸ್ಮಾತ್ ಅವನ ಸ್ನೇಹಿತರು ಯಾರಾದರೂ ಒಂದು ಕ್ಷಣ ತೆಗೆದುಕೊಂಡು ಹೋಗಿದ್ದರೆ ಹೊಗಿರಬಹುದೆಂಬ ಸಣ್ಣ
ಸಂಶಯದಿಂದ ಕೇವಲ ೧೦೦ ರೂಪಾಯಿ ಎಂದು ಕಟ್ಟಿ ಬಿಟ್ಟೆ.
ಈಗ ಒಂದು ವರ್ಷದ ಹಿಂದೆ ಇನ್ನೊಂದು ಅದೇ ದಿವಸ, ಅದೇ ಸಮಯಕ್ಕೆ ಅದೇ ಸ್ಥಳದಲ್ಲಿ ಅದೇ ಉಲ್ಲಂಘನೆ ಆದರೆ ಸೆಲ್ ಫೋನ್ ಉಪಯೋಗಿಸುತ್ತಿದ ಉಲ್ಲಂಘನೆಯೋಟ್ಟಿಗೆ ಬಂದಿತು.

ಆದರೆ ಈ ಬಾರಿ ಈ ಸೂಚನೆಯನ್ನು ನಂಬುವುದಕ್ಕೆ ಒಂದೇ ತೊಂದರೆ. ನನ್ನ ಮಗ ಅಮೇರಿಕಾದಲ್ಲಿ ಇದ್ದ.

ಆ ಸ್ಕೂಟರ್ನ ಏಕೈಕ ಚಾಲಕಿ ನನ್ನ ಮಗಳು ಅದೇ ಸಮಯಕ್ಕೆ ಮನೆಯಲ್ಲೇ ನಡೆಯುತ್ತಿದ್ದ ವರಲಕ್ಷ್ಮಿ ವ್ರತ, ಗೃಹ ಪ್ರವೇಶದಲ್ಲಿ ಭಾಗವಹಿಸುತ್ತಿದಳು.

ಅಷ್ಟೇ ಸಾಲದೆಂಬಂತೆ ಆಗ ತೆಗೆದುಕೊಂಡ ವೀಡಿಯೋದಲ್ಲಿ ಅವಳೂ, ಮತ್ತು ಅಲ್ಲೇ ಬಾಗಿಲಲ್ಲೇ ನಿಂತಿದ್ದ ಸ್ಕೂಟರ್ನ ಚಿತ್ರಗಳೂ ಇದ್ದವು.

ಈ ಬಾರಿ ೨೦೦ ರೂಪಾಯಿ ದಂಡ.
ಸತ್ಯಾಂಶ ತಿಳಿದಿದ್ದ ನಾನು ಮೇಲಧಿಕಾರಿಗಳಿಗೆ- ಮುಖ್ಯ ಮಂತ್ರಿಗಳೊಳಗೊಂDu   - ದೂರು ಕೊಟ್ಟೆ.

ಹಾಗೂ ಪ್ರತಿ ತಿಂಗಳು ಏನಾಯಿತೆಂದು ಕಡೆಯ ೧೧ ಬಾರಿ ಎಲ್ಲರಿಗೂ ಕೇಳಿ ಬರೆದೆ.

ಈಗ ೪ ದಿನದ ಕೆಳಗೆ, ನಾನು ಹೇಳಿದ ಅಂಶಗಳನ್ನು ಕಡೆಗಣಿಸಿ,ಆ ಸ್ಥಳದಲ್ಲಿದ್ದ # ೧೧೩೦೩ ಯ ಪುಸ್ತಕದಲ್ಲಿ ವರದಿ ನಮೂದಿಸಲಾಗಿದೆ, ಹಾಗು ಅದರ ಕ್ಷೆರಾಕ್ಸ್ ಕಾಪಿಯನ್ನು

-ಲಗತ್ತಿಸದೆ- ಲಗತ್ತಿಸಿ ದ್ದೇವೆ. ಆದ್ದರಿಂದ ನಿಮಗೆ ಕಳಿಸಿರುವ ಸೂಚನೆ ಸರಿಯಾಗಿದೆ ಎಂಬ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ, ಫಿರ್ಯಾದಿಯನ್ನು ಕೊನೆಗೊಳಿಸುವ ಸಮಜಾಯಿಷಿಯನ್ನು ಕಳಿಸಿದರು.

ಈ ಬಗ್ಗೆ ಏನು ಮಾಡುವುದೆಂದು ತಿಳಿಯದೆ ಕೆಲವು ನಿದ್ರಾ ರಹಿತ ರಾತ್ರಿಗಳಿಂದ ಚಡಪಡಿಸಿದೆ. ಇದನ್ನು ಅನೇಕರಿಗೆ ಹೇಳಿ ಕೊಂಡು, ೩೦೦ ರೂಪಾಯಿ ತಾನೇ ಹೋದರೆ ಹೋಗಲಿ ಹಾಳಾಗಿ ಹೋಗಲಿ ಬಿಡಿ ಎಂಬ

ಎಂಬ ಅನುಭವಾಮೃತ ಭರಿತ ಬುದ್ಧಿವಾದವನ್ನೂ ಸ್ವಾದಿಸಿದೆ.

ಆದರೆ ಸತ್ಯಕ್ಕೊಸ್ಕರ ಇ ಷ್ಟೆಲ್ಲ ಕಷ್ಟ ಪಟ್ಟರೂ ಏನೋ ಅನ್ಯಾಯವಾಗಿದೆ ಅನ್ನುವ ಕೊರಗು ಕಾಡುತ್ತಲೇ ಇತ್ತು. ತಲೆ ತಿನ್ನುತ್ತಲೇ ಇತ್ತು.

ಇದ್ದಕ್ಕಿದ್ದ ಹಾಗೆ, ಈ ಪುರಾವೆಯನ್ನು ಸೃಷ್ಟಿಸಿದ ಸಿಬ್ಬಂದಿ ,ಉತ್ತ್ತರವನ್ನು ಕಳಿಸಿದ ಅಧಿಕಾರಿ ಗಳನ್ನು ಎಲ್ಲೆಡೆ ಆವರಿಸಿಕೊಂಡಿರುವ ಮಹಾತ್ಮಾ ಗಾಂಧೀ ಯವರ ಫೋಟೋ ಹಾಗೂ ಅವರ ಪ್ರಸಿದ್ಧ

ಉಕ್ತಿ ಸತ್ಯಂ ಏವ ಜಯತೆ ಕಣ್ ಕಟ್ಟಿತು. ಹಾಗಾದರೆ ಹಗಲೂ ರಾತ್ರಿ ಎಲ್ಲಾ ಅಧಿಕಾರಿಗಳ , ರಾಜಕಾರಣಿಗಳ , ನ್ಯಾಯ ಮೂರ್ತಿಗಳ , ಬಾಯಿಂದ ಪ್ರತಿ ಅವಕಾಶದಲ್ಲೂ ಹೊರಡುವ ಈ ಉಕ್ತಿಗೆ ಏನು ಬೆಲೆ?

ಹಾಗು ಎಲ್ಲರಂತೆಯೇ ನಾನೂ ಹೀಗೆಯೇ ಸುಮ್ಮನಾದರೆ ಸತ್ಯದ ಹೋರಾಟದ ಬೆಲೆ ಕೇವಲ ೨೦೦ ರೂಪಯಿಗಳೇ ಏನು ಅನ್ನುವ ಪ್ರಶ್ನೆಯೂ ಧಿಟ್ ಎಂದು ಉದ್ಭವಿಸಿತು.

ಅದಕ್ಕೂ ಮುಖ್ಯವಾಗಿ, ಹೀಗೆ ಸುಳ್ಳು ಪುರಾವೆಗಳಿಂದ ಸರ್ಕಾರದ ನಿಲುವನ್ನು ಸಮರ್ಥಿಸಿಕೊಳ್ಳುವ ಪದ್ಧತಿ, ಸಂಸ್ಕೃತಿಯ ಬಗ್ಗೆ ಹೇಸಿಗೆಯೂ ಉಂಟಾಯಿತು.

ಈ ರೀತಿ ರಿವಾಜಿನಿಂದ ಸತ್ಯದ ಕೊಲೆ ಆಗುತ್ತಿಲ್ಲವೇ ಎನ್ನುವ ಪ್ರಶ್ನೆ ಕಾಡಲು ಶುರು ಮಾಡಿತು.ಹನಿಗೂಡಿದರೆ ಹಳ್ಳ, ಸಣ್ಣ ಸಣ್ಣ ಸುಳ್ಳುಗಳ ಮಹಾ ಪೂರವೇ ಆಗುತ್ತಿದೆ ನಮ್ಮ ದೇಶ ಎಂದೂ ಅನ್ನಿಸಿತು.

ಆ ಪ್ರಶ್ನೆಯನ್ನೇ ಅದೇ ಅಧಿಕಾರಿಗಳ ಮುಂದಿಟ್ಟಿದ್ದೇನೆ.

ಏನಾಗುವುದೆಂದು ನೋಡೋಣ!